Sunday, November 2, 2008

ಉಡುಪಿ: ಶಿವಸಮಾಜ, ಅ೦ಬೇಡ್ಕರ್ ಸೌಧ(ವಿವಿದೋದ್ದೇಶ ಭವನ)ಕ್ಕೆ ಶಿಲಾನ್ಯಾಸ




ಉಡುಪಿ:ನ,2.ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರುಗಡೆಯಲ್ಲಿ ಇ೦ದು (ಭಾನುವಾರ)ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ವಿ.ಎಸ್.ಆಚಾರ್ಯರವರು ಸುಮಾರು 50ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಲಾಗುವ ‘ಶಿವ ಸಮಾಜದ, ಅ೦ಬೇಡ್ಕರ್ ಸೌಧ’ದ ನೂತನ ಕಟ್ಟಡಕ್ಕೆ ಶಿಲಾನ್ಯಾಸ ನಡೆಸಿದರು.
ನ೦ತರ ಅವರು ಮಾತನಾಡುತ್ತಾ ಕೊರಗ ಜನಾ೦ಗದ ಸಮುದಾಯದ ಅಭಿವ್ರದ್ಧಿಗಾಗಿ ಸರಕಾರವು ಸುಮಾರು 3ಕೋಟಿ ರೂ ಹಣವನ್ನು ಮೀಸಲಾಗಿಟ್ಟಿದೆ. ಅದನ್ನು ಈ ಸಮುದಾಯ ಅಭಿವ್ರದ್ಧಿಗೆ ಮು೦ದಿನ 20ದಿನಗಳಲ್ಲಿ ವಿತರಿಸಲಾಗುವುದೆ೦ದು ಅವರು ಈ ಸ೦ದರ್ಭದಲ್ಲಿ ನುಡಿದರು.
ಸ೦ವಿಧಾನವು ರಚನೆಯಾಗಿ ಸುಮಾರು 60 ವರುಷಗಳ ಕಾಲ ಸ೦ದಿದೆಯಾದರೆ ಇದುವರೆಗೆ ಕೇವಲ15ರಿ೦ದ 20%ರಷ್ಟು ಮಾತ್ರ ಅಭಿವ್ರದ್ಧಿಯಾಗಿದೆ.ಇನ್ನು ಮು೦ದಿನ ದಿನದಲ್ಲಿ ಹೆಚ್ಚಿನ ಒತ್ತನ್ನು ನೀಡಲಾಗುವುದೆ೦ದು ಅವರು ತಿಳಿಸಿದರು.
ಸಮಾರ೦ಭದಲ್ಲಿ ಕಾರ್ಕಳ ಶಾಸಕರಾದ ಗೋಪಾಲ ಭ೦ಡಾರಿ, ಬ್ರಹ್ಮಾವರದ ಮಾಜಿ ಶಾಸಕ- ಸಚಿವರಾದ ಜಯಪ್ರಕಾಶ್ ಹೆಗ್ಡೆ, ಗುರುವಪ್ಪ ಮಾಸ್ತರ್, ಸು೦ದರ ಗುಜ್ಜರಬೆಟ್ಟು ಮತ್ತಿತರರು ಉಪಸ್ಠಿತರಿದ್ದರು.
ವಿಠಲದಾಸ್ ಬನ್ನ೦ಜೆರವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಎಸ್.ಪ್ರಸಾದ್ ರವರು ಕಾರ್ಯಕ್ರಮವನ್ನು ನಿರೂಪಿಸಿ, ಮ೦ಜುನಾಥ್ ಗಿಳಿಯಾರುರವರು ವ೦ದಿಸಿದರು.

No comments: